ಅದೃಷ್ಟ-ದುರದೃಷ್ಟ

ಜೀವನದಲ್ಲಿ ಸುಖ ಎನ್ನುವುದು ತನ್ನಿಂದ ತಾನೇ ಬರುವುದಿಲ್ಲ. ಶ್ರಮ ಇದ್ದಾರೆ ಮಾತ್ರ ಸುಖ ಶಾಂತಿ ನೆಮ್ಮದಿ ಸಿಗುವುದು ಕೈಯಲ್ಲಿ ಕಾಸು ಓಡಾಡುವುದು.ಕೇಳವೊಂದು ಬಾರಿ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಇದಕ್ಕೆಲ್ಲ ಮನೆಯಲ್ಲಿ ಇರುವ ಕೆಲವು ವಸ್ತುಗಳೇ ಕಾರಣ ಆಗುತ್ತದೆ.ಪೊರಕೆ ಗೋಡೆ ನಲ್ಲಿ ಜೇಡರ ಬಲೆ ಗಾಳಿ ಬೆಳಕುಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು.ಈ 5 ವಸ್ತುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದಿಲ್ಲವೋ ಅಂತವರ ಬಾಳಲ್ಲಿ ದಾರಿದ್ರ ಎನ್ನುವುದು ತಾಂಡವ ಆಡುತ್ತ ಇರುತ್ತದೆ.

ಎಷ್ಟೇ ಕಠಿಣ ಪೂಜೆ ಮಾಡಿದರು ಕೂಡ ಲಕ್ಷ್ಮಿ ಒಲಿಯುವುದಿಲ್ಲ.ತಾಯಿಗೆ ಇಷ್ಟವಾದ ಹೋಮ ಪೂಜಾ ಕಾರ್ಯಗಳನ್ನು ಮಾಡಿದರು ಕೂಡ ದಾರಿದ್ರ ಎನ್ನುವುದು ದೂರ ಆಗುವುದಿಲ್ಲ. ಇಂತಹ ಸಮಯದಲ್ಲಿ ಮನೆಯಲ್ಲಿರುವ ಪೊರಕೆ ನೆಲ್ಲಿ ಗೋಡೆ ಹಾಗೂ ಜೇಡರ ಬಲೆ ಕಟ್ಟಿದಿಯ ಎನ್ನುವುದನ್ನು ನೋಡಿಕೊಳ್ಳಿ.ಮೊದಲು ಈ 5 ವಸ್ತುಗಳಿಂದ ಎದುರು ಆಗಬಹುದಾದ ದಾರಿದ್ರವನ್ನು ಸರಿ ಪಡಿಸಿಕೊಳ್ಳಿ.

ಹಿಂದೂ ಧರ್ಮದಲ್ಲಿ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಹತ್ತಾರು ಮಾರ್ಗಗಳು ಇವೇ.ಇದನ್ನು ಅನೇಕ ಪುಸ್ತಕಗಳು ಮತ್ತು ಧಾರ್ಮಿಕ ಗ್ರಂಥಗಳಲ್ಲೂ ಕೂಡ ಪುಣ್ಯ ಪುರುಷರು ವಿವರಿಸಿ ಹೋಗಿದ್ದಾರೆ.ಈ ವಿಷಯಗಳನ್ನು ಮನೆಯಲ್ಲೂ ಅಳವಡಿಸಿಕೊಂಡಿದ್ದೆ ಆದಲ್ಲಿ ಸಂತೋಷದ ಜೊತೆಗೆ ಮನೆಯ ಸಮೃದ್ಧಿ ಸಹ ದುಪ್ಪಟ್ಟು ಆಗುತ್ತದೆ.

1) ಮನೆಯಲ್ಲಿ ಇರುವ ನೀರಿನ ಟ್ಯಾಪ್ ಸೊರದಂತೆ ನೋಡಿಕೊಳ್ಳಬೇಕು.ಇದು ದರಿದ್ರದ ಸಂಕೇತ.ನೀರಿನ ನೆಲ್ಲಿ ಸೋರಿದಂತೆ ಮನೆಯಲ್ಲಿ ಇರುವ ಅದೃಷ್ಟವು ಕೂಡ ಸೋರಿ ಹೋಗುತ್ತದೆ.ಹೀಗಾಗಿ ನೀರಿನ ಟ್ಯಾಪ್ ಬಗ್ಗೆ ಸದಾ ಕಾಳಜಿ ವಹಿಸಬೇಕು.

2) ಜೇಡರ ಬಲೆಯೂ ಸಹ ಮನೆಯಲ್ಲಿ ಕಟ್ಟಬಾರದು.ಜೇಡರ ಬಲೆ ಕಟ್ಟಿದ್ದಾರೆ ಅಲ್ಲಿ ದಾರಿದ್ರ ಲಕ್ಷ್ಮಿ ವಾಸವಾಗಿದ್ದಾಳೆ ಎಂದು ಅರ್ಥ.ಜೇಡರ ಬಲೆ ಕಟ್ಟಿರುವ ಮನೆ ಒಳಗೆ ಲಕ್ಸ್ಮಿ ದೇವಿ ಕಣ್ಣೆತ್ತಿ ಕೂಡ ನೋಡುವುದಿಲ್ಲ.ಹೀಗಾಗಿ ಆಗಾಗ ಮನೆಯನ್ನು ಸ್ವಚ್ಛವನ್ನು ಮಾಡುತ್ತ ಇರಿ.ಎಲ್ಲಾದರೂ ಜೇಡರ ಬಲೆ ಇದಿಯೋ ಇಲ್ಲವೋ ಎಂದು ನೋಡಿ ಸ್ವಚ್ಛ ಮಾಡಿ.

3) ಮನೆಯ ಗೋಡೆಗಳು ಯಾವುದೇ ಕಾರಣಕ್ಕೂ ಬಿರುಕು ಬಿಟ್ಟಿರಬಾರದು.ಬಿರುಕು ಬಿಟ್ಟ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎನ್ನುವುದು ಇರುವುದಿಲ್ಲ.ಸದಾ ಒಂದಲ್ಲ ಒಂದು ಕಿರಿ ಕಿರಿ ಇದ್ದೆ ಇರುತ್ತದೆ.ಗೋಡೆಗಳು ಬಿರುಕು ಬಿಟ್ಟಂತೆ ಮನೆಯಲ್ಲಿ ಕಷ್ಟಗಳು ಸದಾ ಬರುತ್ತಾ ಇರುತ್ತವೆ.

4,) ಪೊರಕೆಯನ್ನು ಲಕ್ಷ್ಮಿ ಸ್ವರೂಪ ಎಂದು ಹೇಳುತ್ತಾರೆ.ಹಾಗಾಗಿ ಪೊರಕೆ ಬಗ್ಗೆ ಸದಾ ಜಾಗೃತವಾಗಿ ಇರಬೇಕು.ಯಾವುದೇ ಕಾರಣಕ್ಕೂ ಪೊರಕೆಯನ್ನು ಕಾಲಲ್ಲಿ ತುಳಿಯಬಾರದು.ತುಂಡು ಆಗಿರುವ ಮತ್ತು ಹಳೆಯ ಪೊರಕೆಯನ್ನು ದಾರಿದ್ರದ ಸೂಚಕ.

5.ಇನ್ನು ಬಾಗಿಲ ಮೇಲೆ ಗೆದ್ದಿಲು ಆಗದಂತೆ ಮತ್ತು ಸದಾ ನೀರಿನಿಂದ ವದ್ದೆ ಆಗದಂತೆ ಎಚ್ಚರವಹಿಸಿ.ಮನೆಯ ಬಾಗಿಲು ಸದಾ ಶುಭ್ರವಾಗಿ ಇರಬೇಕು.ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕು ಎಂದರೆ ಈ 5 ವಿಷಯಗಳ ಜೊತೆಗೆ ಕೆಲವೊಂದು ನಿಯಮವನ್ನು ಕೂಡ ಪಾಲಿಸಬೇಕು.ಉಪ್ಪು ಹಾಗೂ ಹಸುವಿನ ಗೊಮೂತ್ರ, ನಿಂಬೆ ಹಣ್ಣಿನ ರಸದಿಂದ ಆಗಾಗ ವರೆಸಬೇಕು.ಇದರಿಂದ ಮನೆಯಲ್ಲಿ ವಾಸ್ತು ದೋಷ ದೂರ ಆಗುತ್ತದೆ.ನಿಮ್ಮ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ನೆಲೆಸುವುದಕ್ಕೂ ಕೂಡ ಇದೆ ಸಾಕ್ಷಿ ಆಗುತ್ತದೆ ಹಾಗೂ ಮನೆಗೆ ಸದಾ ಗಾಳಿ ಬೆಳಕು ಬರುವ ಹಾಗೆ ಇರಬೇಕು.

~~ಸಂಗ್ರಹ ~~